Monday 9 June 2008

ಕಳೆದುಹೋದ ತುಂಗೆಯ ಸಾಹಸಯಾನ




' ಕಾನೂರು ಹೆಗ್ಗದತಿಯಲ್ಲಿ ' (ಇಲ್ಲಿ ದ ತಪ್ಪಾಗಿದೆ ) ಆರಂಭದಲ್ಲಿಯೀ ಕುವೆಂಪು ಅವರು ಪರಿಚಯಿಸುವ ಕುರುವಳ್ಳಿಯ ಕಿರು ಪೀಟೆಗೂ ತೀರ್ಥಹಳ್ಳಿಗೂ ಸಂಪರ್ಕ ಕಲ್ಪಿಸುತ್ತಿದ್ದ ರಾಮತೀರ್ಥದ ಕಲ್ಲು ಸಾರದ ಅವಶ್ಯಕತೆ ಈಗ ಇಲ್ಲ . ಈಗ ತುಂಗೆಗೆ ಬೃಹತ್ ಸೇತುವೆ ನಿರ್ಮಾಣವಾಗಿದೆ .ಇದರಿಂದಾಗಿ ಮಳೆಗಾಲದಲ್ಲಿ ಉಕ್ಕಿ ಸೊಕ್ಕಿ ಹರಿಯುತ್ತಿದ್ದ ತುಂಗೆಯನ್ನು ದಾಟಲು ಬಳಸುತ್ತಿದ್ದ ಹರಿಗೋಲುಗಳ ಅವಶ್ಯಕತೆಯೂ ಈಗ ಇಲ್ಲ .


'ಮಲೆಗಳಲ್ಲಿ ಮದುಮಗಳಿನ ತುಂಗೆಯ ರುದ್ರ ರಮಣೀಯ ಆರ್ಭತದೆದುರು ಜೀವಗಳನ್ನು ಕೈಯ್ಯಲ್ಲಿ ಹಿಡಿದು ಪಯಣಿಸುತ್ತಿದ್ದ ಆ ಪಯಣಿಗರ ಸಾಹಸ ಯಾನ ಇನ್ನೆಲ್ಲಿ ?


ಕಾದಂಬರಿಯಲ್ಲಿ ಪುಟಗಟ್ಟಲೆ ವ್ಯಾಪಿಸಿರುವ ತುಂಗಾ ಯಾನದ ವಿವರಗಳು ಓದುಗನನ್ನೂ ನದಿಯ ಸೆಳವಿನೊಳಗೆ ಸೆಳೆದುಕೊಳ್ಳುತ್ತಿದ್ದ ಆ ಸುಮನೋಹರ ಭಯಂಕರ ವರ್ಣನೆಗಳು ಇನ್ನೆಲ್ಲಿ ?


ನಾಗರಿಕತೆಯ ಸವಲಭ್ಯಗಳುಮನುಷ್ಯ ಜೀವನದ ರೋಚಕತೆ , ಸಂಭ್ರಮ , ಕುತೂಹಲಗಲನ್ನು ಕೊಂದು ಹಾಕಿ ಬದುಕನ್ನು ನಿರ್ಜೀವ ಯಾನ್ತ್ರಿಕವನ್ನಾಗಿಸುತ್ತಿವೆಯೇ ?

Sunday 8 June 2008

ತುಂಗೆಯ ಸಲಿಲ


ಶೃಂಗೇರಿಯ ಬಳಿಯಲ್ಲಿ ಹರಿಯುತ್ತಿರುವ ತುಂಗೆಯು ಸುತ್ತಲೂ ಹಬ್ಬಿದ ಮಲೆಗಳಿಂದ ತಬ್ಬಿದ ಕಾನನದಿಂದ ತನ್ನ ಶುಭ್ರ ಸಲಿಲ ಜಲದಿಂದ ಮನೋಹರವಾಗಿ ಕಂಗೊಲಿಸುವಳು ಇಲ್ಲಿನ ವಿದ್ಯಾ ಶಂಕರ ದೇವಾಲಯವು ಹೊಯ್ಸಳ ಮಾದರಿಯಲ್ಲಿ ರಚಿಸಿದ ಒಂದು ಸುಂದರ ದೇವಾಲಯ . ಕ್ಷೇತ್ರ ದೇವತೆ ಶಾರದಾನ್ಬೆಯು ಭಾವುಕರ ಮನತಣಿಸುವ ವಿದ್ಯಾಧಿ ದೇವತೆ . ಶಂಕರಾಚಾರ್ಯರು ಸ್ಥಾಪಿಸಿದ ಚತುರಾಮ್ನಾಯ ಪೀಥಗಳಲ್ಲಿ ಇದು ಮೊದಲನೆಯದು .